ದುಬೈಯಲ್ಲಿ ಶ್ರೀಕೃಷ್ಣ ಒಡ್ಡೋಲಗ
ಲೇಖಕರು : ವಾಸು ಬಾಯಾರ್
ಸೋಮವಾರ, ಜನವರಿ 25 , 2016
|
ಜನವರಿ 25, 2016
|
ದುಬೈಯಲ್ಲಿ ಶ್ರೀಕೃಷ್ಣ ಒಡ್ಡೋಲಗ
ದುಬೈ :
ಸುಮಾರು 12 ವರ್ಷಗಳ ಹಿಂದೆ ದುಬೈಯಲ್ಲಿ ಉದ್ಯೋಗ ನಿಮಿತ್ತ ನೆಲೆನಿಂತ ಸಮಾನ ಆಸಕ್ತರು ಒಗ್ಗೂಡಿ ಯಕ್ಷಮಿತ್ರರು ದುಬೈ ಎಂಬ ಸಂಘಟನೆಯ ಮೂಲಕ ಮರಳು ಗಾಡಿನಲ್ಲಿ ಯಕ್ಷಕೃಷಿ ಪ್ರಾರಂಭಿಸಿದರು. ನಿಧಾನವಾಗಿ ದುಬೈ ಯಕ್ಷರಸಿಕರ ಮನದಲ್ಲಿ ನೆಲೆನಿಂತ "ಯಕ್ಷಮಿತ್ರರು' ದುಬೈ ನೆಲದಲ್ಲೂ ಯಕ್ಷಗಾನ ಬೆಳೆಸಬೇಕೆಂಬ ಹೆಬ್ಬಯಕೆಯಿಂದ, ಇಲ್ಲಿಯ ಮಕ್ಕಳಿಗೆ ಯಕ್ಷಗಾನ ತರಬೇತಿ ಕೊಡಲಾರಂಭಿಸಿತು.
ಹೀಗೆ ಕಟ್ಟಿಕೊಂಡ ಯಕ್ಷಮಿತ್ರರ ಮಕ್ಕಳ ತಂಡ ಈಚೆಗೆ ದುಬೈ ತುಳುಕೂಟದ ವತಿಯಿಂದ ಜರಗಿದ ತುಳು ಪರ್ಬದ ಅವಸರದಲ್ಲಿ ಪ್ರದರ್ಶಿಸಿದ ಯಕ್ಷ ತುಣುಕು -ಪರಂಪರೆಯ ಶ್ರೀಕೃಷ್ಣ ಒಡ್ಡೋಲಗ ಅಂದು ಪ್ರದರ್ಶನಗೊಂಡ ಬೇರೆಲ್ಲ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಜನಾಕರ್ಷಣೆ ಪಡೆಯಿತು.
ದುಬೈ ಅಲ್ ನಸರ್ ಲೀಸರ್ಲ್ಯಾಂಡಿನ ಐಸ್ರಿಂಕ್ ಒಳಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವತರಾಗಿ ಮೆರುಗಿ ತ್ತವರು ಕೃಷ್ಣಪ್ರಸಾದ್ ಭಟ್ ಸುರತ್ಕಲ್. ಹಿಮ್ಮೇಳದಲ್ಲಿ ವೆಂಕಟೇಶ ಶಾಸಿŒ ಪುತ್ತಿಗೆ, ವಿಕ್ರಮ ಶೆಟ್ಟಿ ಕಡಂದಲೆ, ಚಂದ್ರಮೋಹನ್ ಶೆಟ್ಟಿಗಾರ್ ಮೂಲ್ಕಿ, ಸೀತಾರಾಮ ಶೆಟ್ಟಿ ಚಿಲಿಂಬಿ ಇದ್ದರು.
ಶ್ರೀಕೃಷ್ಣನಾಗಿ ಕು| ಅದಿತಿ ದಿನೇಶ್ ಶೆಟ್ಟಿ ಆಕರ್ಷಕ ನಗುಮೊಗದಿಂದ ರಂಜಿಸಿದರು. ಕಾಳಿಂದಿಯಾಗಿ ಕು| ಆದಿತ್ಯ ದಿನೇಶ್ ಶೆಟ್ಟಿ, ನೀಲೆಯಾಗಿ ಕು| ಸ್ಮತಿ ಲಕ್ಷ್ಮೀಕಾಂತ ಭಟ್, ಭದ್ರೆಯಾಗಿ ಕು| ಪ್ರತೀಕ್ ಪಕ್ಕಳ, ಸತ್ಯಭಾಮೆಯಾಗಿ ಕು| ಸಮಂತ ಹೆಗ್ಡೆ, ರುಕ್ಮಿಣಿಯಾಗಿ ಸ್ವಾತಿ ಶರತ್ ಆಚಾರ್ ಮಿಂಚಿದರು. ತುಳು ಪರ್ಬಕ್ಕಾಗಿಯೆ ಆಗಮಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕಲಾವಿದರನ್ನು ಅಶೀರ್ವದಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದು ಯಕ್ಷಮಿತ್ರರ ಪಾಲಿಗೆ ಹೆಮ್ಮೆಯೇ ಸರಿ.
ಈ ಪ್ರದರ್ಶನದ ಯಶಸ್ಸಿನಲ್ಲಿ ಯಕ್ಷಮಿತ್ರರ ಬೆನ್ನೆಲುಬಾಗಿ ಚಿದಾನಂದ ಪೂಜಾರಿ ವಾಮಂಜೂರು ಮತ್ತು ದಿನೇಶ್ ಶೆಟ್ಟಿ ಕೊಟ್ರಂಜ ಅವರ ಕೊಡುಗೆ ಗಮನಾರ್ಹ. ಮುಖ ವರ್ಣಿಕೆ, ವೇಷಭೂಷಣಗಳಲ್ಲಿ ಸಹಕರಿಸಿದವರು ವಾಸು ಬಾಯಾರು, ದಿನೇಶ್ ಬಿಜೈ, ರಿತೇಶ್ ಕುಮಾರ್, ಬಾಲಕೃಷ್ಣ ಶೆಟ್ಟಿಗಾರ್, ಹರೀಶ್ ಯೆಯ್ನಾಡಿ, ವಸಂತ ಶೇರ್ವೆಗಾರ್, ಗಿರೀಶ್ ನಾರಾಯಣ ಕಾಟಿಪಳ್ಳ. ಪ್ರದರ್ಶನದ ಪರಿಕಲ್ಪನೆ- ನಿರ್ದೇಶನ ನಾಟ್ಯಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಅವರದ್ದಾಗಿತ್ತು.
ಕೃಪೆ :
udayavani
|
|
|